ಬೆಳಗಿತು ಕನ್ನಡ ದೀಪ, ಮೊಳಗಿತು ಕರುನಾಡ ಕಹಳೆ

ಬೆಂಗಳೂರು: ಸೊಬಗಿನ ಸಂಜೆಯಲ್ಲಿ ಬೆಳಗಿತು ಕನ್ನಡ ದೀಪ, ಮೊಳಗಿತು ಕರುನಾಡ ಕಹಳೆ. ಮಕ್ಕಳ ನೃತ್ಯ, ಹಿರಿಯರ ಹಾಡಿನ ಪಾರುಪತ್ಯ, ನವಯುಗದ ಡಾನ್ಸ್ ಗೂ ಕನ್ನಡದ ಕಂಪಿನ ಸ್ಪರ್ಶ. ಆದ್ದರಿಂದಲೇ ರಾಜ್ಯೋತ್ಸವ ಮಾಸದ ಸಂಭ್ರಮಾಚರಣೆಯಲ್ಲಿ ಹೊಮ್ಮಿತು ಇಮ್ಮಡಿ ಹರ್ಷ.

ಇಂಥ ಕನ್ನಡೋತ್ಸವದ ಉತ್ಸಾಹ ಕಾಣಿಸಿದ್ದು ವಿಠಲ್ ನಗರದಲ್ಲಿ ಕಳೆದ ರಾತ್ರಿ. ನಾಡಿನ ಹೆಮ್ಮೆಯ ಕವಿಗಳು ರಚಿಸಿದ ಗೀತೆಗಳಿಗೆ ಗರುಡ ನಾಟ್ಯ ಸಂಘದ ಪುಟಾಣಿ ಕಲಾವಿದರು ನೃತ್ಯದ ಬೆಡಗು ನೀಡಿದರು. ಭರತನಾಟ್ಯ ಪಟು ರಘುನಂದನ್ ಪರಿಣತಿಪೂರ್ಣ ನಾಟ್ಯ ಪ್ರದರ್ಶನ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.

ಸಂಸ್ಕೃತಿಯ ಬಿಂಬದ ಜತೆಗೆ ಕಾಲಕ್ಕೆ ಹೊಂದಿಕೊಂಡು ಹೊಸತನ್ನು ಕೂಡ ಕನ್ನಡಿಕರಿಸುವ ಪ್ರಯತ್ನವೂ ಇದೇ ವೇದಿಕೆಯಲ್ಲಿ ನಡೆಯಿತು. ಸೋಸಿಯೊ ಫಿಟ್ನೆಸ್ ಕಲಾವಿದೆಯರು ಕನ್ನಡದ ಹಾಡುಗಳಿಗೆ ಜುಂಬಾ ಡಾನ್ಸ್ ಹೊಳಪಿನ ಪ್ರಭಾವಳಿ ಕಟ್ಟಿಕೊಟ್ಟರು. ಶಿವಗಂಗಾ ನಾಟ್ಯಾಲಯದ ಯುವತಿಯರು ಆಕರ್ಷಕ ಭಾವಭಂಗಿಯೊಂದಿಗೆ ಅನಾವರಣಗೊಳಿಸಿದ ಕನ್ನಡ ಶಿವಾರಾಧನೆಯ ಸೌಂದರ್ಯವಂತೂ ಮುದಗೊಳಿಸುವಂಥದ್ದಾಗಿತ್ತು.

ರಾಜ್ಯೋತ್ಸವ ಮಾಸದ ಸಂಭ್ರಮಾಚರಣೆ


MUSIC WAS HIS SOUL MATE




RAVINDRA YAVAGAL
(THE WRITER IS A LEADING TABLA PLAYER OF THE STATE.)
Photo: V. SREENIVASA MURTHY

Pandit D.S. Garud was one of the early maestros who brought Hindustani music to Bangalore. The 97-year-old musician who was a picture of deep commitment passed away last week.


During my growing up and learning years in Dharwad, I didn't know of Pandit D.S. Garud. Once in a while I used to hear my guru Sheshagiri Hangal and other leading musicians mention the name of a Dattappa, who was an extraordinary musician in Bangalore. Apart from that I knew nothing. Sheshadri Gawai would visit Dharwad regularly and hence when I came to Bangalore, he was the only person I knew.

When I moved to Bangalore in 1982, I met Pandit Ramarao Naik. He was such a traditional man, but in our very first meeting he had said, “Why don't you stay with me till you settle down in Bangalore?” Somehow the concern that he showed towards me made me feel very close to him. And it remained that way till his end. Years later, because of my association with Ramarao Naik and other musicians, I gradually learnt of D.S. Garud's exceptional scholarship. But to this day, I wonder why I never went to his house and learnt from him? Even by listening to him I could have learnt many things. Maybe I did have a reason. It was a felicitation programme to Rama Rao Naik and all the top artistes had assembled that day. Garudji was providing saath to Ramarao Naik's vocal concert. I was sitting in the audience along with my friends and I guess we cracked some joke and laughed. Later, after the concert, when I went up to Rama Rao Naik and wished Garudji, he immediately said, “you youngsters laugh at old tabaliyas like us?” I was taken aback. Somehow, after that day, I felt a little intimidated by his stern demeanour, though I was always in awe of his great scholarship.

The Bangalore Sangeeth Sabha was set up in 1948 and it was D.S. Garud's brain child. He set it up with the view that artistes have to perform and not spend an entire life teaching. Teaching is a one-to-one activity but performing involves the community. Now so many people stake claims over propagating music in Bangalore; but it was actually Garudji, Govind Vittal Bhave and Sheshadri Gawai who brought Hindustani music to Bangalore. And none of them ever bothered about publicity.

Garudji was very straight forward and blunt. He never did anything that was against his consciousness. In his boyhood days, he was aspiring to be an actor, but he had a polio attack and his father Sadashivrao Garud, the doyen of company theatre, insisted that he should learn music which would be of immense help to the company as well. He left home and struggled to master his music; he even worked in Bollywood before he actually came to Bangalore and became a full-fledged musician. He travelled from one place to the other, tried his hands at various things, met several people but a steady life was far from close. What compounded matters was his unbending self-respect, even when hunger, poverty and despair loomed large.

I feel very moved by the kind of people they were. Their passion and determination to excel was so high that they never thought of consequences. We are so caught up with livelihood and material comforts, and even in the most trying circumstances I don't think it crossed Garudji's mind ever. He lived in a rented house all his life and didn't even allow his children to take care of him.

You can imagine what a great musician he was by listening to his students like the sitarist Pandit Gopinath. Till recently, Pandit Gopinath continued his tutelage under Garudji. This sustained learning accounts for his acute sense of laya and his awareness of rhythm as an intrinsic attribute of music. Probably, his idea of training his students to keep track of the tala without a dependence on the tabla, stems from this awareness. Pandit Garud voluntarily offered tabla saath to this chosen student and accompanied him on the tabla for several years.

The life and times of Pandit Garud is the story of a committed musician. It's a story of hardship and simplicity, of a man who sought no fame or name, but stuck to music like penance. These are stories we can only hear, we no longer live in times where we can witness them unfold before us.


Courtesy: The Hindu

ನೃತ್ಯ ಸಾಗರದಲ್ಲಿ ಭಕ್ತಿಯ ಸಾರ

ಹಬ್ಬದ ದಿನ ಅಬ್ಬರದ ಮಳೆ, ಭಕ್ತಿಯ ಸಾಗರವಾಗುವಂಥ ನೃತ್ಯ ನೋಡುವ ಕಾತರದಲ್ಲಿ ಕಾಯ್ದಿದ್ದವರು ಸಾವಿರಾರು. ಅವರ ಮನದಾಳವನ್ನು ಅರಿತನೇನೋ ವರುಣದೇವ! ಅಬ್ಬರಿಸಿ ಅಷ್ಟೇ ಬೇಗ ತಣ್ಣಗಾದ. ಅತ್ತ ನೀರು ಸರಸರ ಇಳಿಜಾರಿನ ಕಡೆಗೆ ಹರಿಯಿತು. ಇತ್ತ ಅಂಬೆಯ ಆರಾಧಕರ ಮನವು ಭಕ್ತಿಪೂರ್ಣ ನೃತ್ಯ ಪ್ರದರ್ಶನದ ಕಡೆಗೆ ಹರಿಯಿತು.

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿ, ಅರಳಿಯ ಮರದ ಎಲೆಯಂಚಿನಿಂದ ಜಾರಿ ಬಿದ್ದಾಗ ಮೈಮನ ಪುಳಕಿತ. ಕೈಮುಗಿದು ಶಕ್ತಿ ಮಾತೆಯ ಭಕ್ತಿ ಸಾಗರದಲ್ಲಿ ಒಂದಾಗುವ ಹೊತ್ತಿಗೆ ಹಕ್ಕಿಗಳು ಕೂಡ ಹಾಡಿ ಗೂಡು ಸೇರಿಯಾಗಿತ್ತು. ವರುಣನ ಅಬ್ಬರ ಮುಗಿದು ಪ್ರಕೃತಿಯ ಸಂಗೀತ ಕಚೇರಿಯೂ ಮೌನ; ಸೂರ್ಯ ಬಾನಂಚಿನ ತೆರೆಯಮರೆಗೆ ಸರಿಯುವ ಆ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಕೃತವಾದ ರಂಗದ ಪರದೆ ಮೇಲೆದ್ದಿತು. ಅಲ್ಲಿ ತೆರೆದುಕೊಂಡಿತು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.

ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ. ಅವರೆಲ್ಲರೂ ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪ ವಾಗಿ ನಿಂತರು. ಅದೆಷ್ಟೊ ಹೊತ್ತು ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಅಲ್ಲಿ ಹರಿಯಿತು. ಚಿತ್ತವನು ಅತ್ತಿತ್ತ ಕದಲಿಸದೇ; ಸ್ತಬ್ಧ ಚಿತ್ರಗಳಂತೆ ಕುಳಿತ ಪ್ರೇಕ್ಷಕರ ಕಂಗಳ ತುಂಬಾ ಭಕ್ತಿಯ ಹೊಳಪು ಅಪಾರ.

ಕಾಲ ಉರುಳಿದ್ದೇ ಅರಿವಾಗಲಿಲ್ಲ. ಹೌದು; ಜಗತ್ಪಾಲಿನಿಯ ಮಹಿಮೆಯನ್ನು ಹಾಡಿ, ಕೊಂಡಾಡಿ, ನಲಿದಾಡುವಾಗ ಹೊತ್ತು ಕಳೆಯಿತೆಂದು ಯೋಚಿಸಲಾದರೂ ಹೇಗೆ ಸಾಧ್ಯ? ಜಗದಂಬೆಯ ಅವತಾರಗಳು ತೆರೆ ತೆರೆಯಾಗಿ ಹರಿದು ಬಂದು ಹೃದಯ ಕಡಲ ಅಂಚಿಗೆ ಅಪ್ಪಳಿಸುವಾಗ ಬೇರೆ ಯೋಚನೆಯ ಸುಳಿದಾಟವೇ ಇಲ್ಲ. ಎಲ್ಲವೂ ಮಾಯ; ಅದೇ ಭಕ್ತಿಯ ಮಾಯೆ!

ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಿತು. ಅದೇ ‘ಅಂಬಾ ಭವಾನಿ ವೈಭವ’ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಿದ್ದು ‘ಗರುಡ ನಾಟ್ಯ ಸಂಘ’ದ ಪ್ರತಿಭಾವಂತ ಯುವ ಕಲಾವಿದರು. ಕುಮಾರಸ್ವಾಮಿ ಬಡಾವಣೆಯಲ್ಲಿನ ‘ಶ್ರೀ ಅಂಬಾ ಭವಾನಿ ದೇವಸ್ಥಾನ’ದಲ್ಲಿ ನಡೆದ ದೇವಿ ವರ್ಣನೆಯ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರಿಗೆ ಮುದ ನೀಡಿತು.

ಭರತ ನಾಟ್ಯ ಹಾಗೂ ಸಮಕಾಲೀನ ನೃತ್ಯ ಮೇಳೈಸಿದ ‘ಕಾಂಟೆಂಪರರಿ ಕ್ಲಾಸಿಕಲ್’ ಶೈಲಿಯಲ್ಲಿ ಪ್ರಸ್ತುತಪಡಿಸಿದ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಫ್ಯೂಷನ್ ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ನೋಡುವುದು ಎಷ್ಟೊಂದು ಸೊಗಸು ಎನ್ನುವ ಅನುಭವವಾಯಿತು.

"ಗರುಡ ನಾಟ್ಯ ಸಂಘ"ದ ನೃತ್ಯ ಕಲಾವಿದರಾದ ಶೋಭಾ ಎಂ. ಲೋಲನಾಥ್, ರಘುನಂದನ್. ಎಸ್, ಸಾಕೇತ ಕೃಷ್ಣ, ಲತಾ ಎಸ್. ರಾವ್, ಡಾ.ಅಮ್ಮು, ದಿವ್ಯಾ ರಘುರಾಮ್, ಹಿಮಾ ದೇವೀರಪ್ಪ, ಸುಪ್ರಿಯಾ ದೇವೀರಪ್ಪ, ಖುಶಿ ಪ್ರಶಾಂತ್ ಹಾಗೂ ಹರಿಣಿ ಪುರುಷೋತ್ತಮ್ ಅವರು ಪರಿಣತಿಯೊಂದಿಗೆ ಚೊಕ್ಕದಾದ ರೀತಿಯಲ್ಲಿ "ಶ್ರೀ ಅಂಬಾ ಭವಾನಿ ವೈಭವ"ವನ್ನು ರಂಗದ ಮೇಲೆ ಪ್ರದರ್ಶಿಸಿದರು. ಕುಣಿಗಲ್ ಶಾಸಕರಾದ ಬಿ.ಬಿ. ರಾಮಸ್ವಾಮಿ ಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿನಿಮಾ ಹಾಗೂ ಟೆಲಿವಿಷನ್ ನಿರ್ದೇಶಕ ರಾಜು ಮೋಕಾಶಿ ಹಾಗೂ ಕಿರುತೆರೆ ನಟ ವಿಷ್ಣು ಪ್ರಸನ್ನ ಅವರು ಸಮಾರಂಭಕ್ಕೆ ಕಳೆಕಟ್ಟಿದರು.

ಅಂಬೆಯ ಸನ್ನಿಧಿಯಲ್ಲಿ ನೃತ್ಯ ಕಾರ್ಯಕ್ರಮ

ಸೂರ್ಯ ಬಾನಂಚಿನ ತೆರೆಯ ಮರೆಗೆ ಸರಿಯುವ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಂಕೃತವಾದ ರಂಗದ ಮೇಲೆ ಅನಾವರಣ ಗೊಳ್ಳುವವು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.

ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ ಮೂಡುವಂಥ ಸೊಬಗು. ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪವಾಗಿ ನಿಂತು ದೇವಿ ಆರಾಧಕರನ್ನು ಭಕ್ತಿ ಸಾಗರದಲ್ಲಿ ಸೆಳೆದೊಯ್ಯುವುದೇ ಈ ಎಲ್ಲ ಕಲಾವಿದೆಯರ ಆಶಯ. ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಹರಿಯಬೇಕೆನ್ನುವುದು ತುಡಿತ ಹಾಗೂ ಮಿಡಿತ.

ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಲಿದೆ. ಅದೇ "ಅಂಬಾ ಭವಾನಿ ವೈಭವ"ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಲಿರುವವರು "ಗರುಡ ನಾಟ್ಯ ಸಂಘ"ದ ಪ್ರತಿಭಾವಂತ ಯುವ ಕಲಾವಿದೆಯರು.

ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ "ಗರುಡ ನಾಟ್ಯ ಸಂಘ"ದ ಹೊಸ ತಲೆಮಾರಿನ ಕಲಾವಿದರು ಇದೇ ಶನಿವಾರ(1ನೇ ಅಕ್ಟೋಬರ್, 2011)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ "ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.

ಭರತ ನಾಟ್ಯ ಹಾಗೂ ಕಾಂಟೆಂಪರರಿ ನೃತ್ಯವನ್ನು ಮೇಳೈಸಿದ "ಕಾಂಟೆಂಪರರಿ ಕ್ಲಾಸಿಕಲ್" ಶೈಲಿಯಲ್ಲಿ ಪ್ರಸ್ತುತಪಡಿಸುವ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರಿಗೆ ರಸದೌತಣ ನೀಡಲಿದೆ. "ಫ್ಯೂಜನ್" ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ಸೊಬಗನ್ನು ಶೋಭಾ ಎಂ. ಲೋಲನಾಥ್ ಹಾಗೂ ರಘುನಂದನ್ ನೇತೃತ್ವದ ಕಲಾವಿದ ಬಳಗವು ತಮ್ಮ ಕಲಾ ಕೌಶಲದಿಂದ ಪ್ರದರ್ಶಿಸಲಿದೆ.

ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ಶನಿವಾರ(1ನೇ ಅಕ್ಟೋಬರ್, 2011)ದಂದು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಕುಣಿಗಲ್ ಶಾಸಕ ಶ್ರೀ ಬಿ.ಬಿ. ರಾಮಸ್ವಾಮಿ ಗೌಡ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಿನೀಮಾ ಹಾಗೂ ಟೆಲಿವಿಷನ್ ನಿರ್ದೇಶಕ ರಾಜು ಮೋಕಾಶಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ರಾಜಕೀಯ ಪರಿಸ್ಥಿತಿಯ ಬಿಂಬವಾದ ಗೊಂಬೆ

ಸಿಂಗರಿಸಿಕೊಂಡ "ಮೋಟು" ಕತ್ತೆ ಗೆಜ್ಜೆ ಸದ್ದಿನೊಂದಿಗೆ ಹೆಜ್ಜೆ ಹಾಕುತ್ತಾ ಬಂದಾಗ ಕಿರಿಯರು ಮಾತ್ರವಲ್ಲ ಹಿರಿಯರೂ ಮನದುಂಬಿ ನಕ್ಕರು.

ಮುದ್ದಿನ ಕತ್ತೆಯ ಮುಗ್ಧ ಯಜಮಾನ ಮೋಸಹೋಗುವ ರೀತಿಯನ್ನು ಕೂಡ ಕಂಡ ಅದೇ ಪ್ರೇಕ್ಷಕರು ಮರುಗಿದರು. ಮೋಸದ ಮಾತಿನ ಮೋಡಿಗಾರನ ಕಡೆಗೆ ನೋಡಿ ಯೋಚನೆ ಕೂಡ ಮಾಡಿದರು. ಇದೆಲ್ಲೋ ನಮ್ಮದೇ ಕಥೆ ಎನ್ನುವ ಚಿಂತನ ಮಂಥನವೂ ಜನರ ಮನದೊಳಗೆ ಮೊಳಕೆಯೊಡೆಯಿತು.

ಮೋಸ ಮಾಡುವ ರಾಜಕಾರಣಿಗಳು ಹೇಗೆ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎನ್ನುವ ವ್ಯಂಗ್ಯದೊಂದಿಗೆ "ಗಾರ್ದಭ ಮನುಷ್ಯ" ಗೊಂಬೆ ಆಟ ಕೊನೆಗೊಂಡಾಗ ಪ್ರೇಕ್ಷಕರ ಒಳನೋಟದಲ್ಲಿಯೂ ಯೋಚನೆಗಳ ಸುಳಿದಾಟ! ಹೌದು; ಚಿಂತನೆಗೆ ಅವಕಾಶ ನೀಡುವಂಥ ಗಂಭೀರವಾದ ವಿಷಯವನ್ನು ಹಾಸ್ಯದ ಸಿಹಿ ಲೇಪದೊಂದಿಗೆ ನೋಡುಗರ ಮುಂದೆ ತೆರೆದಿಟ್ಟರು "ಗೊಂಬೆ ಮನೆ" ಕಲಾವಿದರು.

ಗರುಡ ನಾಟ್ಯ ಸಂಘವು ಆಯೋಜಿಸಿದ್ದ ಗಾರ್ದಭ ಮನುಷ್ಯ ಗೊಂಬೆ ಆಟವು ಇಂದಿನ ರಾಜಕೀಯ ಪರಿಸ್ಥಿತಿಯನ್ನು ವಿಭಿನ್ನವಾದ ರೀತಿಯಲ್ಲಿ ವಿಡಂಬನಾತ್ಮಕವಾಗಿ ವಿವರಿಸಿದ್ದು ವಿಶೇಷ.

ಸಂತಾನ ಭಾಗ್ಯವಿಲ್ಲದ ಅಗಸನು ತನ್ನ ಕತ್ತೆಯನ್ನು ಮನುಷ್ಯನನ್ನಾಗಿ ಪರಿವರ್ತಿಸಿಕೊಂಡು, ಮಗನನ್ನಾಗಿಯೂ ಮಾಡಿಕೊಂಡು ಸಾಕುವ ಆಸೆಯಲ್ಲಿ ಮೋಸ ಹೋಗುವುದೇ ಈ ಗೊಂಬೆ ಪ್ರಹಸನದ ಸಾರ.

ಮಧ್ಯ ಏಷ್ಯಾದ ಜನಪದ ಕಥೆಯನ್ನು ನಟರಾಜ್ ಹೊನ್ನವಳ್ಳಿ ಅವರು ವಿಶಿಷ್ಟವಾದ ರೀತಿಯಲ್ಲಿ ಗೊಂಬೆ ಆಟಕ್ಕೆ ಹೊಂದುವಂತೆ ರಂಗರೂಪಕ್ಕೆ ಇಳಿಸಿದ್ದಾರೆ. ಸಮಕಾಲೀನ ಸ್ಥಿತಿಗೆ ಒಪ್ಪುವ ರೀತಿಯಲ್ಲಿ ಅದನ್ನು ಗೊಂಬೆ ಆಟವಾಗಿಸಿದ ಶ್ರೇಯ ಡಾ.ಪ್ರಕಾಶ್ ಗರುಡ ಅವರದ್ದು. ಅಜಿತ್ ರಾವ್ ಅವರು ಮೊಗಲ್ ಕಲಾ ಶೈಲಿಯನ್ನು ಗೊಂಬೆಗಳ ವಿನ್ಯಾಸಕ್ಕೆ ಅಳವಡಿಸಿದ್ದರೂ, ಕಾರ್ಟೂನ್ ಗಳ ರೀತಿಯಲ್ಲಿ ಮನಕ್ಕೆ ಮುದ ನೀಡುವಂಥ ಮುಖಭಾವ ನೀಡಿದ್ದು ನೋಡಲು ಆಕರ್ಷಕ.

"ಗಾರ್ದಭ ಮನುಷ್ಯ" ಪ್ರದರ್ಶನದ ಜೀವಾಳ ಮಾತ್ರ ನಾಗರಾಜ್ ಹೆಗಡೆ ಅವರ ಸಂಗೀತ ಸಂಯೋಜನೆ. ಜೊತೆಗೆ ಗೊಂಬೆ ಆಡಿಸುವ ಕಲಾವಿದರಾದ ರವಿ, ಧನಂಜಯ, ಲಿಂಗರಾಜ, ದೀಪಾ ಹಾಗೂ ವಸಂತಾ ಅವರ ಕೌಶಲ್ಯ ಮತ್ತು ಪ್ರೇಕ್ಷಕರನ್ನು ಹಿಡಿದಿಡುವಂಥ ಧ್ವನಿ ಏರಿಳಿತವು ಮೆಚ್ಚುಗೆಗೆ ಅರ್ಹ. ಗಂಭೀರವಾದ ಕಥೆಯನ್ನು ಸುಲಭವಾಗಿ ನೋಡುಗರ ಮನದಾಳಕ್ಕೆ ಇಳಿಸುವಲ್ಲಿ ಈ ಎಲ್ಲ ಅಂಶಗಳು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ "ಗಾರ್ದಭ ಮನುಷ್ಯ" ಪ್ರಹಸನಕ್ಕೆ ಸಹಕಾರಿ ಎನಿಸಿದವು.

ರಾಜಕೀಯ ವಿಡಂಬನೆಯ ಗೊಂಬೆ ಆಟ

ಮತ ಹಾಕಿ ತಮ್ಮನ್ನು ಆಯ್ಕೆ ಮಾಡಿದ ಜನರನ್ನು ರಾಜಕಾರಣಿಗಳು ಆನಂತರ ಕತ್ತೆಗಳು ಎನ್ನುವಂತೆ ನೋಡುತ್ತಾರೆ. ಹಲವಾರು ಸಂದರ್ಭದಲ್ಲಿ ತಿಳುವಳಿಕೆ ಇಲ್ಲದ ಕತ್ತೆಗಳು ಈ ಜನವೆಂದು ಮೂರ್ಖರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಾರೆ. ಆದರೆ ಅದೇ ಜನರು ನ್ಯಾಯಾಧೀಶರಾಗಿ ನಿಂತರೆ ರಾಜಕಾರಣಿಗಳ ಸ್ಥಿತಿ ಏನಾಗುತ್ತದೆ? ಈ ಪ್ರಶ್ನೆಗೆ ಉತ್ತರ ನೀಡುತ್ತದೆ "ಗರುಡ ನಾಟ್ಯ ಸಂಘ" ಹಾಗೂ "ಗೊಂಬೆ ಮನೆ" ಪ್ರದರ್ಶಿಸುವ ರಾಜಕೀಯ ವಿಡಂಬನೆಯ ಗೊಂಬೆ ಆಟ "ಗಾರ್ದಭ ಮನುಷ್ಯ" ಪ್ರದರ್ಶನ.

ರಜನಿ ಹಾಗೂ ಪ್ರಕಾಶ ಗರುಡ ನೇತೃತ್ವದಲ್ಲಿ ಸಿದ್ಧಗೊಂಡಿರುವ "ಗಾರ್ದಭ ಮನುಷ್ಯ" ಗೊಂಬೆ ಆಟವು ಸದ್ಯದ ರಾಜಕೀಯ ಪರಿಸ್ಥಿತಿಯನ್ನು ವಿಡಂಬನೆ ಮಾಡುತ್ತದೆ. ಅಣ್ಣಾ ಹಜಾರೆ ಅವರ ಹೋರಾಟವನ್ನು ಆರಂಭದಲ್ಲಿ ರಾಜಕಾರಣಿಗಳು ನೋಡಿದ ರೀತಿಯನ್ನು ಹಾಗೂ ಆನಂತರ ಈ ಹೋರಾಟವು ಜನಾಂದೋಲನವಾಗಿ ರಾಜಕಾರಣಿಗಳನ್ನೇ ಬೆದರಿಸಿದ ರೀತಿಯನ್ನು "ಗಾರ್ದಭ ಮನುಷ್ಯ" ಪ್ರದರ್ಶನವು ಸರಳವಾಗಿ ಹಾಗೂ ಆಕರ್ಷಕವಾದ ರೀತಿಯಲ್ಲಿ ತಿಳಿಸುತ್ತದೆ.

ಜನರನ್ನು ಕತ್ತೆಗಳು ಎನ್ನುವಂತೆ ಭಾವಿಸಬೇಡಿ; ಅವರೇ ಕೊನೆಯಲ್ಲಿ ನ್ಯಾಯಾಧೀಶರಾಗುತ್ತಾರೆ. ಅವರೇ ನಿಮ್ಮ ರಾಜಕೀಯ ಭವಿಷ್ಯವನ್ನು ತೀರ್ಮಾನಿಸುವ ನಿರ್ಣಾಯಕ ಶಕ್ತಿ ಅಗುತ್ತಾರೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ರಾಜಕಾರಣಿಗಳಿಗೆ ನೀಡುವ "ಗಾರ್ದಭ ಮನುಷ್ಯ" ಗೊಂಬೆ ಆಟವು ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಇಷ್ಟವಾಗುವಂಥದು.

ರಂಜನೆಯ ಉದ್ದೇಶದ ಜೊತೆಗೆ ಸಮಾಜಕ್ಕೆ ಒಳಿತಾಗುವಂಥ ಸಂದೇಶವನ್ನು ನೀಡುವ ಈ ಗೊಂಬೆ ಪ್ರದರ್ಶನವು ಮಂಗಳವಾರ (30ನೇ ಆಗಸ್ಟ್ 2011) ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ ಕಲ್ಚರ್ ಸಭಾಂಗಣದಲ್ಲಿ ಸಂಜೆ 6.45ಕ್ಕೆ ನಡೆಯಲಿದೆ. ಅಂತರರಾಷ್ಟ್ರೀಯ ಹ್ಯೂಮರ್ ಕ್ಲಬ್ ಸ್ಥಾಪಕ ಅಧ್ಯಕ್ಷ ವೈ.ಎಂ.ಎನ್. ಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.


"ಗಾರ್ದಭ ಮನುಷ್ಯ"
(ಅವಧಿ 60 ನಿಮಿಷ)
ಮೂಲ: ಮಧ್ಯ ಏಶೀಯಾದ ಜನಪದ ಕಥೆ
ರಂಗರೂಪ: ನಟರಾಜ ಹೊನ್ನವಳ್ಳಿ
ಗೊಂಬೆಗಳ ವಿನ್ಯಾಸ: ಅಜಿತ ರಾವ್, ಮುಂಬಯಿ
ಸಂಗೀತ: ನಾಗರಾಜ ಹೆಗಡೆ
ನೆರಳು ಗೊಂಬೆ ಪರಿಕಲ್ಪನೆ ನಿರ್ದೇಶನ: ಡಾ. ಪ್ರಕಾಶ ಗರುಡ

ಈ ನೆರಳು ಗೊಂಬೆ ಆಟವು ಕರ್ನಾಟಕದ ಪಾರಂಪರಿಕ ತೊಗಲು ಗೊಂಬೆ ಆಟಗಾರರು, ಆಧುನಿಕ ಚಿತ್ರ ಕಲಾವಿದರ ಸಹಯೋಗದಲ್ಲಿ ಸಿದ್ಧಗೊಂಡಿದೆ ಪಾರಂಪರಿಕ ತೊಗಲು ಗೊಂಬೆಳ ವಿನ್ಯಾಸದ ಜೊತೆಗೆ ಕಾರ್ಟೂನ್ ಚಿತ್ರಕಲೆ, ಮೊಗಲ್ ಮಿನಿಯೇಚರ್ ಚಿತ್ರಕಲೆ ಇವುಗಳ ವಿನ್ಯಾಸ, ವರ್ಣಗಳನ್ನು ಮೇಳೈಸಿದ ಒಂದು ತಾಸಿನ ಈ ಕಥೆಗೆ ಸುಮಾರು 35 ಗೊಂಬೆಳನ್ನು ರಚಿಸಲಾಗಿದೆ. ಕಥೆಯ ನಿರೂಪಣೆ, ದೃಶ್ಯೀಕರಣ, ಸಂಗೀತ, ಬೆಳಕಿನ ವಿನ್ಯಾಸ ಈ ಅಂಶಗಳಲ್ಲಿ ಹೊಸ ಪ್ರಯೋಗ ಮಾಡಲಾಗಿದೆ.

ಸಂತಾನ ಭಾಗ್ಯವಿಲ್ಲದ ಅಗಸ ಮುಲ್ಲಾನಿಗೆ ಸಾಕಿದ ಕತ್ತೆ "ಆಳೂ" ಆಗಿದೆ "ಮಗ"ನೂ ಆಗಿದೆ ಪಂಡಿತೋತ್ತಮ ಮೌಲ್ವಿಯ ಮಾತಿಗೆ ಮರುಳಾದ ಅಗಸ, ಕತ್ತೆಯನ್ನು "ಮನುಷ್ಯ"ನನ್ನಾಗಿ ಮಾಡಲು ಶಕ್ಯವಿದೆ. ಎಂದು ನಂಬಿ ಮೌಲ್ವಿಗೆ ಕತ್ತೆಯನ್ನೂ ಜತೆಗೆ ಕೈ ತುಂಬ ಹಣವನ್ನೂ ತೆತ್ತು ಬರುತ್ತಾನೆ. ಆರು ತಿಂಗಳು ಕಳೆದ ಮೇಲೆ ಅಗಸ ಅಗಸಗಿತ್ತಿ ಆಸೆಯಿಂದ ಮೌಲ್ವಿಯನ್ನು ಹೋಗಿ ಕಾಣುತ್ತಾರೆ. ತನ್ನಿಂದಾಗಿ "ಮನುಷ್ಯ"ನಾಗಿರುವ ಆ ಕತ್ತೆ ಇಗ ವಾರಣಾಸಿಯ ನ್ಯಾಯಾಲಯದಲ್ಲಿ "ಖಾಜಿ" ಆಗಿದ್ದಾನೆಂದು ಮೌಲ್ವಿ ಹೇಳಿದ್ದನ್ನು ನಂಬಿ ದಂಪತಿಗಳು ಕಂಡರಿಯದ ಆ ಪಟ್ಟಣಕ್ಕೆ "ಮಗ"ನನ್ನು ಕಾಣಲು ಧಾವಿಸುತ್ತಾರೆ. ಅವರ "ಕತ್ತೆ" ಅಲ್ಲಿ "ನ್ಯಾಯಾಧೀಶ"ನಾಗಿದ್ದಾನೆ.? "ನ್ಯಾಯಾಧೀಶ"ನಾಗಿ ಇವರನ್ನು ಆತ ಹೇಗೆ ಕಂಡ? "ಮನುಷ್ಯ" ರೂಪಿ "ಕತ್ತೆ" ಅಥವಾ "ಕತ್ತೆ" ರೂಪಿ "ಮನುಷ್ಯ"ನಿಂದ ನಾವು ಕಲಿಯುವ ಪಾಠ ಏನು? ಇದು ಈ ಗೊಂಬೆ ಆಟದ ಕುತೂಹಲಕಾರಿ ಕಥೆ. ಪ್ರಹಸನ ಮಾದರಿಯ ಈ ಆಟದಲ್ಲಿ ಬರುವ ಅನಿರೀಕ್ಷಿತ ಘಟನೆಗಳು ಮಕ್ಕಳಿಗೆ ಆಪ್ತವಾದರೆ, ಪ್ರಬುದ್ಧ ಪ್ರೇಕ್ಷಕರನ್ನು ಸಮಕಾಲೀನ ವ್ಯಾಖ್ಯಾನದೊಂದಿಗೆ ಚಿಂತನೆಗೆ ಹಚ್ಚುತ್ತವೆ.

ಪಂಡಿತ್ ದತ್ತಾತ್ರೇಯ ಗರುಡ ನಿಧನ

ಬೆಂಗಳೂರು: ಕರ್ನಾಟಕದ ಖ್ಯಾತ ಸಂಗೀತ ಕಲಾವಿದರು ಹಾಗೂ ಸಂಗೀತ ಗುರು ಪಂಡಿತ್ ದತ್ತಾತ್ರೇಯ ಗರುಡ (97 ವರ್ಷ) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದತ್ತಾತ್ರೇಯ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಕೊನೆಯುಸಿರು ಎಳೆದರು. "ನಾಟಕಾಲಂಕಾರ ಸದಾಶಿವರಾವ್ ಗರುಡ" ಅವರ ಹಿರಿಯ ಪುತ್ರರಾದ ದತ್ತಾತ್ರೇಯ ಅವರು ಕರ್ನಾಟಕ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇತ್ತೀಚೆಗಷ್ಟೇ ಚೌಡಯ್ಯ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದರು.

ಸಂಗೀತ ಗುರುವಾಗಿ ಸಾವಿರಾರು ಕಲಾ ಆಸಕ್ತರಿಗೆ ಸಂಗೀತ ಜ್ಞಾನವನ್ನು ನೀಡಿದ್ದ ದತ್ರಾತ್ರೇಯ ಅವರು ತಮ್ಮ ಬದುಕಿನ ಕೊನೆಯ ಕ್ಷಣದಲ್ಲಿಯೂ ಸಂಗೀತದ ಧ್ಯಾನದಲ್ಲಿಯೇ ಲೀನರಾಗಿದ್ದರು. ದೇಶದ ಖ್ಯಾತ ಗಾಯಕರ ಕಚೇರಿಗಳಲ್ಲಿ ತಬಲಾ ಸಾಥ್ ನೀಡಿದ್ದ ದತ್ತಾತ್ರೇಯ ಅವರು ಸಂಗೀತವೇ ಬದುಕಿಗೆ ಉತ್ಸಾಹದ ಅಮೃತವಾಗಬೇಕು ಎನ್ನುವ ಆಶಯದೊಂದಿಗೆ ಪುಸ್ತಕಗಳನ್ನು ಕೂಡ ಬರೆದು ಪ್ರಕಟಿಸಿದ್ದರು.

ದತ್ತಾತ್ರೇಯ ಗರುಡ ಅವರ ನಿಧನಕ್ಕೆ ಗರುಡ ನಾಟ್ಯ ಸಂಘದ ಕಲಾವಿದರು ಸಂತಾಪ ಸೂಚಿಸಿದ್ದಾರೆ. "ಸಂಗೀತವನ್ನೇ ಆರಾಧಿಸಿ ಋಷಿಯಂತೆ ಬದುಕು ನಡೆಸಿ ಆದರ್ಶದ ಹಾದಿ ತೋರಿಸಿಕೊಟ್ಟ ದತ್ತಾತ್ರೇಯ ಅವರ ಅಗಲಿಕೆಯಿಂದ ಕಲಾ ಜಗತ್ತಿಗೆ ತುಂಬಲಾಗದ ನಷ್ಟವಾಗಿದೆ" ಎಂದು ಗರುಡ ನಾಟ್ಯ ಸಂಘದ ಕಾರ್ಯದರ್ಶಿ ಶೋಭಾ ಎಂ.ಲೋಲನಾಥ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

"ಕರ್ನಾಟಕ ನಾಟಕಾಲಂಕಾರ"

ಗದಗ ಜಿಲ್ಲೆಯಲ್ಲಿ ಈ ಬಾರಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ಗದಗದಲ್ಲಿಯೇ ನೆಲೆಸಿ ಈ ನಾಡಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಸಾಹಿತಿಗಳು, ನಾಟಕಕಾರರು, ಕವಿಗಳಿಗೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಕ್ಕ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ.

ಅದೇ ರೀತಿಯಲ್ಲಿ ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ "ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ" ಶ್ರೀ ಸದಾಶಿವರಾವ್ ಗರುಡ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವ ಮೂಲಕ ಹಾಗೂ ಅವರಿಗೆ ತಕ್ಕ ಗೌರವ ಸಲ್ಲಿಸುವ ಮೂಲಕ ಸಾಹಿತ್ಯ ಕ್ಷೇತ್ರವು ಅವರಿಗೆ ತಕ್ಕ ಮಾನ ನೀಡಬೇಕಾಗಿರುವುದು ಅಗತ್ಯವಾಗಿದೆ.

ಆದ್ದರಿಂದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀ ಸದಾಶಿವರಾವ್ ಗರುಡ ಅವರ ಹೆಸರಿನಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ದ್ವಾರ ಅಥವಾ ಸ್ವಾಗತ ಕಮಾನು ನಿರ್ಮಿಸುವ ಮೂಲಕ ಅವರು ಕನ್ನಡ "ನಾಟಕ ಸಾಹಿತ್ಯ"ಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಈ ವಿಷಯವನ್ನು ಸಂಘಟಕರು ಮರೆತರೆ ಅದು ಈ ಭಾಗದ ಮಹಾನ್ ನಾಟಕಕಾರ ಶ್ರೀ ಸದಾಶಿವರಾವ್ ಗರುಡ ಅವರ ಸಾಧನೆಯ ಸ್ಮರಣೆಯಲ್ಲಿ ದೊಡ್ಡ ಅಪಚಾರ ಮಾಡಿದಂತೆ ಆಗುತ್ತದೆ. ಈ ಕುರಿತು ಈಗಾಗಲೇ ಸಂಬಂಧಿಸಿದವರಿಗೆ ಮನವಿ ಪತ್ರವನ್ನು ಕಳುಹಿಸಲಾಗಿದೆ (ಪ್ರತಿಗಳನ್ನು ಈ ಪತ್ರಿಕಾ ಪ್ರಕಟಣೆಯ ಜೊತೆಗೆ ಲಗತ್ತಿಸಲಾಗಿದೆ).

ಈ ಕಾರಣಕ್ಕಾಗಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಕರು ಶ್ರೀ ಸದಾಶಿವರಾವ್ ಗರುಡ ಅವರ ಹೆಸರಿನಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ದ್ವಾರ ಅಥವಾ ಸ್ವಾಗತ ಕಮಾನು ನಿರ್ಮಿಸುವ ಕೆಲಸವನ್ನು ಮಾಡಬೇಕಾಗಿ ವಿನಂತಿ.

ನಮ್ಮ ವಿನಂತಿ:

"ಗರುಡ ನಾಟ್ಯ ಸಂಘ"ದ ನೂರಾರು ಕಲಾವಿದರ ಈ ಮನವಿಯನ್ನು ಪರಿಗಣಿಸಿ ಗದಗದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ "ನಾಟಕಾಲಂಕಾರ" ಶ್ರೀ ಸದಾಶಿವರಾವ್ ಗರುಡ ಅವರ ಹೆಸರಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ಕಮಾನು ನಿಮರ್ಿಸುವ ಮೂಲಕ ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಈ ಮಹನಿಯರಿಗೆ ತಕ್ಕ ಗೌರವವನ್ನು ಸಲ್ಲಿಸಬೇಕಾಗಿ ಸಂಘಟಕರಲ್ಲಿ ವಿನಯಪೂರ್ವಕವಾದ ಪ್ರಾರ್ಥನೆ.

ಶ್ರೀ ಸದಾಶಿವರಾವ್ ಗರುಡ ಅವರ ಕಿರು ಪರಿಚಯ:

"ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ", "ನಾಟ್ಯಾಚಾರ್ಯ" ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು "ಗರೂಡ ಸದಾಶಿವರಾಯರು" ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಉಚ್ರಾಯ ಸ್ಥಿತಿಯಲ್ಲಿದ್ದ 1905ರಿಂದ 1940ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಸದಾಶಿವರಾವ್ ಗರುಡ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ "ರಂಗಭೂಮಿ ಶಿಸ್ತು" ಪಾಲಿಸಿಕೊಂಡು ಹೋಗುತ್ತಿದ್ದಾರೆ.

"ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ "ಸತ್ಯ ಸಂಕಲ್ಪ" ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ "ಕಂಸವಧ", "ಕೃಷ್ಣಲೀಲಾ", ಲಂಕಾದಹನ" ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ "ಜೈ ಭಾರತ ಮಾತಾ", "ಬ್ರಿಟಿಷರಿಗೆ ಧಿಕ್ಕಾರ"ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

ನಾಟಕ ಸಾಹಿತ್ಯಕ್ಕೆ ಶ್ರೀ ಸದಾಶಿವರಾವ್ ಗರುಡ ಅವರು ನೀಡಿದ ಕೊಡುಗೆಯೂ ಅಪಾರ. 50ಕ್ಕೂ ಹೆಚ್ಚು ನಾಟಕಗಳನ್ನು ಬರೆದು ರಂಗದ ಮೇಲೆ ಪ್ರದರ್ಶಿಸಿದ್ದರು. "ಶ್ರೀರಾಮ ಪಾದುಕಾ ಪಟ್ಟಾಭಿಷೇಕ", "ವಿಷಮ ವಿವಾಹ", "ಲಂಕಾ ದಹನ", "ಕಂಸವಧ", "ಚವತಿ ಚಂದ್ರ", ಮಾಯಾ ಬಜಾರ", "ಸತ್ಯ ಸಂಕಲ್ಪ", "ನಮ್ಮ ಭಾಗ್ಯೋದಯ", "ದುರಾತ್ಮ ರಾವಣ", "ಉಗ್ರ ಕಲ್ಯಾಣ", "ಶಕ್ತಿ ವಿಲಾಸ"...ಮುಂತಾದ ನಾಟಕಗಳು ಈಗಲೂ ಜನಮನದಲ್ಲಿ ಉಳಿದಿವೆ.

ಗರುಡ ನಾಟ್ಯ ಸಂಘ ಪರಿಚಯ:

ಶ್ರೀ ಸದಾಶಿವರಾವ್ ಗರುಡ ಅವರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದಿಂದ ಸ್ಥಾಪಿತವಾದ "ಗರುಡ ನಾಟ್ಯ ಸಂಘ"ವು ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ; ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿಯೂ ನೂರಾರು ಹವ್ಯಾಸಿ ನಾಟಕ, ನೃತ್ಯ ಪ್ರದರ್ಶನಗಳನ್ನು ನೀಡಿದೆ. ಬೆಂಗಳೂರಿನಲ್ಲಿಯೂ ತನ್ನ ಕೇಂದ್ರವನ್ನು ಸ್ಥಾಪಿಸುವ ಮೂಲಕ "ಗರುಡ ನಾಟ್ಯ ಸಂಘ"ವು ತನ್ನ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ. ಈಗ ಬೆಂಗಳೂರಿನಲ್ಲಿ ಚುರುಕಿನ ಚಟುವಟಿಕೆಗಳಿಂದ ಸಾಮಾಜಿಕ ವಿಷಯಗಳನ್ನು ಬಿಂಬಿಸುವ ನೃತ್ಯ, ನಾಟಕ ಹಾಗೂ ರೂಪಕಗಳನ್ನು ಪ್ರದರ್ಶಿಸುವ ಕೆಲಸವನ್ನು ಮಾಡುತ್ತಿದೆ. ಕಿರುತೆರೆ ಕಲಾವಿದೆಯೂ ಆಗಿರುವ ಶೋಭಾ ಎಂ.ಲೋಲನಾಥ್ ಅವರ ನೇತೃತ್ವದಲ್ಲಿ ರಂಗ ಹಾಗೂ ನೃತ್ಯ ಚಟುವಟಿಕೆಗಳ ಜೊತೆಗೆ, ಛಾಯಾಗ್ರಹಣ, ಚಿತ್ರಕಲೆ, ನೃತ್ಯಕಲೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಅಷ್ಟೇ ಅಲ್ಲ ವನ್ಯಜೀವಿಗಳ ರಕ್ಷಣೆಗಾಗಿ ನೃತ್ಯ ಚಳವಳಿ ಕೂಡ ನಡೆಸುಕೊಂಡು ಬರುತ್ತಿದೆ.

ಇಂಥದೊಂದು ಸಂಘವನ್ನು ಯುವಕರು ಕಟ್ಟುವಂತೆ ಪ್ರೇರಣೆ ನೀಡಿದ ಶ್ರೀ ಸದಾಶಿವರಾವ್ ಗರುಡ ಅವರಿಗೆ ಗದಗದಲ್ಲಿ ನಡೆಯುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಕ್ಕ ಗೌರವನ್ನು ಸಲ್ಲಿಸುವ ಸಕಾರಾತ್ಮಕವಾದ ಪ್ರಯತ್ನ ಮಾಡುವ ಮೂಲಕ ಗದುಗಿನ ನಾಟಕಕಾರರಾದ ಶ್ರೀ ಸದಾಶಿವರಾವ್ ಗರುಡ ಅವರು "ನಾಟಕ ಸಾಹಿತ್ಯ"ಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಮಾಡುತ್ತಾರೆಂದು ನಾವು ವಿಶ್ವಾಸ ಹೊಂದಿದ್ದೇವೆ.

ಏಕತೆಯ ಸಂದೇಶ ಸಾರಿದ "ಸಂಗಮ"

ಭುವಿಯಲ್ಲಿ ಜನಿಸಿದ ಎಲ್ಲರೂ ನಡೆಯುವ ಭೂಮಿ, ಕುಡಿಯುವ ನೀರು...ಎಲ್ಲವೂ ಒಂದೇ; ಆದರೆ ನಮ್ಮಲ್ಲಿ ಜಾತಿ, ಧರ್ಮ ಹಾಗೂ ವರ್ಣ ಬೇಧ ಏಕೆ ಎಂದು ಯೋಚಿಸುವಂತೆ ಮಾಡಿದರು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ನಲಿದ ನಾಟ್ಯ ಕಲಾವಿದೆಯರು. ಆಂಧ್ರ ಮಹಾಕವಿ ಅನ್ನಮಯ್ಯ ಬರೆದ ಕಾವ್ಯದ ನಾಲ್ಕು ಸಾಲುಗಳನ್ನು ಗರುಡ ನಾಟ್ಯ ಸಂಘದ ಪುಟ್ಟ ಹಾಗೂ ಯುವ ಕಲಾವಿದರು ಅರ್ಥಪೂರ್ಣವಾಗಿ ರಂಗದ ಮೇಲೆ ಪ್ರದರ್ಶಿಸಿದ್ದು ವಿಶೇಷ.

ಒಂದೆಡೆ ನೃತ್ಯದ ಮೂಲಕ ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರಿದರೆ; ಇನ್ನೊಂದೆಡೆ ಅದೇ ವೇದಿಕೆಯಲ್ಲಿ "ಹ್ಯೂಮರ್ ಕಿಂಗ್" ವೈ.ಎಂ.ಎನ್. ಮೂರ್ತಿ ಅವರು ಜೀವನದಲ್ಲಿ ಸರ್ವರೂ ಪಾಲಿಸಬೇಕಾದ ಸತ್ವಯುತವಾದ ತತ್ವಗಳನ್ನು ಹಾಸ್ಯದ ಸಿಹಿಲೇಪದೊಂದಿಗೆ ಪ್ರೇಕ್ಷಕರಿಗೆ ಹಂಚಿದರು. ಆದ್ದರಿಂದ ಅಂದು ಸಂಜೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್ ಭವನದಲ್ಲಿ ಸೇರಿದ್ದವರ ಮನಕ್ಕೆ ರಂಜನೆಯ ಹಿತದೊಂದಿಗೆ ಒಂದಾಗಿ ಬಾಳುವ ಸಂದೇಶವೂ ತಂಗಾಳಿಯಾಗಿ ಸೋಕಿತು.

ಆದ್ದರಿಂದಲೇ ಅದೊಂದು ನೃತ್ಯ ಸೊಬಗಿನ ಹರಿವಿನ ಜೊತೆಗೆ ಹಾಸ್ಯದ ಪ್ರವಾವಹವೂ ಒಂದಾದ ಅಪೂರ್ವವಾದ ಹಾಗೂ ಅರ್ಥಪೂರ್ಣವಾದ "ಸಂಗಮ" ಸ್ಥಾನವೆನಿಸಿತು. "ಪರಭ್ರಹ್ಮ ಒಂದೇ" ಎನ್ನುವ ಸಂದೇಶವು ಗೆಜ್ಜೆಗಳ ಸದ್ದಿನೊಂದಿಗೆ ನೃತ್ಯ ಪ್ರಿಯರ ಎದೆಯೊಳಗೆ ನಿನಾದ ಮಾಡಿತು.

ಕಿರುತೆರೆ ಕಲಾವಿದೆ ಶೋಭಾ ಲೋಲನಾಥ್ ಮತ್ತು ಉತ್ಸಾಹಿ ಭರತನಾಟ್ಯ ಪಟು ಎಸ್.ರಘುನಂದನ್ ನೇತೃತ್ವದಲ್ಲಿ ಯುವ ಕಲಾವಿದರು ಕ್ಲಾಸಿಕಲ್ ಹಾಗೂ ಸಮಕಾಲೀನ ನೃತ್ಯವನ್ನು ವಿಭಿನ್ನವಾದ ರೀತಿಯಲ್ಲಿ ರಂಗವೆನ್ನುವ ಕ್ಯಾನ್ವಸ್ ಮೇಲೆ ರಂಗುಗಳ ಚಿತ್ತಾರವಾಗಿ ಬಿಡಿಸಿಟ್ಟರು. ಭಕ್ತಿಯ ಜೊತೆಗೆ ತತ್ವವೂ ಬೆರೆತಿದ್ದರಿಂದ ಸಂಪ್ರದಾಯದ ಚೌಕಟ್ಟಿನೊಳಗೆ ವೈಚಾರಿಕ ಅಂಶಗಳು ಬಿಂಬಿತವಾದವು.

ತಾರಾಕುಮಾರಿ ಎಂ.ಎಲ್, ನವೀನ್ ಕುಮಾರ್, ನಿಧಿ ಶ್ರೀನಾಥ್, ರಮ್ಯಾ ವೆಂಕಟೇಶ್, ಯೋಗಿತಾ ಎಲ್.ಎಂ., ಸಂಧ್ಯಾ ದಿನೇಶ್, ಅನಘಾ ಭಟ್, ವರ್ಷಾ ವೆಂಕಟೇಶ್, ಗಿರೀಶ್ ಭಟ್ ಹಾಗೂ ಕಾರ್ತಿಕ್ ಗಿರೀಶ್ ಶರ್ಮ ಅವರು ಪ್ರತಿಭಾಪೂರ್ಣವಾದ ನೃತ್ಯಾಭಿನಯದಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

ಇನ್ನೊಂದು ವಿಶೇಷವೆಂದರೆ ಇದೇ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರಳಾದ ಪುಟ್ಟ ಕಲಾವಿದೆ ವರ್ಷಾ ವೆಂಕಟೇಶ್ಗೆ ಸಹೃದಯಿಯಾದ ಕಿಶೋರ್ ಕುಮಾರ್ ಅವರು ಹದಿನೈದು ಸಾವಿರ ರೂಪಾಯಿ ಶಿಕ್ಷಣ ಪ್ರೋತ್ಸಾಹ ಧನವಾಗಿ ನೀಡಿದರು. ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಸಹಯೋಗದಲ್ಲಿ ನಡೆದ "ಸಂಗಮ" ಕಾರ್ಯಕ್ರಮಕ್ಕೆ ಕಳೆಕಟ್ಟಿದ ಕಿರುತೆರೆ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಕಿರಣ್, ಸಾಯಿ ಗೋಲ್ಡ್ ಪ್ಯಾಲೆಸ್ ಒಡೆಯರಾದ ಸರವಣ ಹಾಗೂ ಆರ್.ಎಂ.ಎಸ್. ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿಗಳಾದ ರತ್ನಾ ಎಂ. ಶ್ರೀನಿವಾಸ್ ಕೂಡ ಕಲಾವಿದವೃಂದಕ್ಕೆ ಮುತ್ತಿನಂಥ ಮಾತುಗಳ ಹಾರ ತೊಡಿಸಿದರು.

ಹಾಸ್ಯ-ನೃತ್ಯ "ಸಂಗಮ"

ನೃತ್ಯ ಸೊಬಗಿನ ಹರಿವಿನ ಜೊತೆಗೆ ಹಾಸ್ಯದ ಪ್ರವಾವಹವೂ ಒಂದಾಗುವ ಅಪೂರ್ವ "ಸಂಗಮ" ಸ್ಥಾನ! ಹೌದು; ಗರುಡ ನಾಟ್ಯ ಸಂಘ ಇಂಥದೊಂದು ರಸದೌತಣವನ್ನು ಕಲಾಪ್ರಿಯ ಸಹೃದಯರಿಗೆ ಉಣಬಡಿಸಲಿದೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಸಹಯೋಗದೊಂದಿಗೆ ಇದೇ ಭಾನುವಾರ (24ನೇ ಜನವರಿ, 2010) ಸಂಜೆ 6.30ಕ್ಕೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್ ಸಭಾಂಗಣದಲ್ಲಿ ಗರುಡ ನಾಟ್ಯ ಸಂಘದ ಕಲಾವಿದರು ನೃತ್ಯದ ಸುಂದರ ಹಂದರದ ನಡುವೆ ತತ್ವ ಸಾರಕ್ಕೆ ಅಲಂಕಾರ ರತ್ನ ಕಿರೀಟ ತೊಡಿಸುವರು.

ಗೆಜ್ಜೆ ಕಟ್ಟಿ ಹೆಜ್ಜೆ ಹಾಕು ಕಲಾವಿದರು "ಪರಭ್ರಹ್ಮ ಒಂದೇ" ಎನ್ನುವ ಸಂದೇಶವನ್ನೂ ಸಾರುವರು. ಅಷ್ಟೇ ಅಲ್ಲ ಅದೇ ವೇದಿಕೆಯಲ್ಲಿ "ಹ್ಯೂಮರ್ ಕಿಂಗ್" ವೈ.ಎಂ.ಎನ್. ಮೂರ್ತಿ ಅವರು ಜೀವನದಲ್ಲಿ ಪಾಲಿಸಬೇಕಾದ ಸತ್ವಯುತವಾದ ತತ್ವಗಳನ್ನು ಹಾಸ್ಯದ ಸಿಹಿಲೇಪದೊಂದಿಗೆ ಪ್ರೇಕ್ಷಕರಿಗೆ ಹಂಚುವರು. ಆದ್ದರಿಂದಲೇ ಇದು ಅರ್ಥಪೂರ್ಣವಾದ ಹಾಸ್ಯ-ನೃತ್ಯ ಸಂಗಮ ಸ್ಥಾನ.

ಟೆಲಿವಿಷನ್ ನಟಿ ಶೋಭಾ ಲೋಲನಾಥ್ ಮತ್ತು ಭರತನಾಟ್ಯ ಪಟು ಎಸ್. ರಘುನಂದನ್ ನೇತೃತ್ವದಲ್ಲಿ ಯುವ ಕಲಾವಿದರು ಕ್ಲಾಸಿಕಲ್ ಹಾಗೂ ಸಮಕಾಲೀನ ನೃತ್ಯವನ್ನು ವಿಭಿನ್ನವಾದ ರೀತಿಯಲ್ಲಿ ರಂಗವೆನ್ನುವ ಕ್ಯಾನ್ವಾಸ್ ಮೇಲೆ ರಂಗುಗಳ ಚಿತ್ತಾರವಾಗಿ ಬಿಡಿಸಿಡುವುದನ್ನು ನೋಡುವುದೇ ಕಣ್ಣಿಗೆ ಸೊಗಸು. ಭಕ್ತಿಯ ಜೊತೆಗೆ ತತ್ವವನ್ನು ಬೆರೆಸಿದ ವಿಶಿಷ್ಟವಾದ ನಾಟ್ಯಕಲಾ ಪ್ರದರ್ಶನವಿದು.

ಇಂಥದೊಂದು ಹಾಸ್ಯ ಮತ್ತು ನೃತ್ಯದ "ಸಂಗಮ" ಕಾರ್ಯಕ್ರಮಕ್ಕೆ ಕಳೆಕಟ್ಟಲು ಟೆಲಿವಿಷನ್ ಧಾರಾವಾಹಿಗಳ ನಿರ್ದೇಶಕ ಹಾಗೂ ನಿರ್ಮಾಪಕರಾದ ರವಿ ಕಿರಣ್, ಸಮಾಜ ಸೇವಕ ಕಿಶೋರ್ ಕುಮಾರ್ ಹಾಗೂ ಆರ್.ಎಂ.ಎಸ್. ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿಗಳಾದ ರತ್ನಾ ಎಂ. ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ತಾರಾಕುಮಾರಿ ಎಂ.ಎಲ್, ನವೀನ್ ಕುಮಾರ್, ನಿಧಿ ಶ್ರೀನಾಥ್, ರಮ್ಯಾ ವೆಂಕಟೇಶ್, ಯೋಗಿತಾ ಎಲ್.ಎಂ., ಸಂಧ್ಯಾ ದಿನೇಶ್, ಅನಘಾ ಭಟ್, ವರ್ಷಾ ವೆಂಕಟೇಶ್, ಗಿರೀಶ್ ಭಟ್ ಹಾಗೂ ಕಾರ್ತಿಕ್ ಗಿರೀಶ್ ಶರ್ಮ ಅವರು ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿರುವ ಯುವ ಕಲಾವಿದರು.

"ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ

ಬೆಂಗಳೂರು: ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ "ಗರುಡ ನಾಟ್ಯ ಸಂಘ"ದ ಕಲಾವಿದರು ಇದೇ ಭಾನುವಾರ (ಸೆಪ್ಟೆಂಬರ್ 27, 2009)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ "ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.

ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಬನಶಂಕರಿ ದೇವಸ್ಥಾನದ ದರ್ಮದರ್ಶಿಗಳಾದ ಎಚ್. ಸುರೇಶ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾಜ ಸೇವಕರಾದ ಕೆ.ಕಿಶೋರ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ರೇಡಿಯೊ ಜಾಕಿ "ಆರ್ ಜೆ" ಬಾಬ್ಬಿ (ಎಫ್.ಎಂ.-92.7) ಅವರು ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿರುವುದು ವಿಶೇಷ.

"ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನ

ಚಿತ್ತ ಕದಿಯುವಂತಹ ಅನೇಕ ದೃಶ್ಯಾವಳಿಗಳು ನಮ್ಮ ಸುತ್ತಲೂ ಹರಡಿಕೊಂಡಿವೆ. ಅವುಗಳನ್ನು ವಿಶಿಷ್ಟವಾದ ರೀತಿಯಲ್ಲಿ ನೋಡುವುದು ಹಾಗೂ ಅವುಗಳನ್ನು ಒಂದು ಕಲಾಕೃತಿಯಾಗಿಸುವುದೇ ವಿಶೇಷ ಅನುಭೂತಿ. ಆದರೆ ಕಂಡಿದ್ದನ್ನು ಕಂಡಹಾಗೆ ಎನ್ನುವುದಕ್ಕಿಂತ ಅದಕ್ಕೊಂದು ಅರ್ಥ ನೀಡುವ ರೀತಿಯಲ್ಲಿ ಯಾವುದೇ ಒಂದು ಕಲಾ ರೂಪಕ್ಕೆ ಇಳಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಕಲಾವಿದನ ಹೃದಯವೂ ಬೇಕು.

ಅಂತಹ ಕಲಾವಿದನ ಹೃದಯ ಹೊಂದಿರುವ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾದ ರೀತಿಯಲ್ಲಿ ಕಂಡಿದ್ದಾರೆ. ತಾವು ಕಂಡಿದ್ದನ್ನು ಛಾಯಾಚಿತ್ರಗಳ ಮೂಲಕ ಕಲಾ ಪ್ರಿಯರಾದ ಸಹೃದಯರ ಮುಂದೆ ಇಡುತ್ತಿದ್ದಾರೆ. ಜೂನ್ 6, 2009 (ಶನಿವಾರ)ರಂದು "ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್ನಲ್ಲಿ ಏರ್ಪಡಿಸಿದ್ದಾರೆ.

ಪ್ರತಿ ದಿನವೂ ನಾವು ಹಲವಾರು ದೃಶ್ಯಗಳನ್ನು ಕಾಣುತ್ತೇವೆ. ಅವುಗಳಲ್ಲಿ ಅನೇಕ ಸೂಕ್ಷ್ಮಗಳು ಇರುತ್ತವೆ. ಆದರೆ ಸಹಜವಾಗಿ ನೋಡುವಾಗ ಅವು ವಿಶೇಷ ಎನಿಸುವುದೇ ಇಲ್ಲ. ಅಂತಹ ಸೂಕ್ಷ್ಮಗಳನ್ನು ಕೂಡ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಗೋಡೆಯ ಮೇಲೆ ಬೆಳೆಯುವ ಅತಿ ಸೂಕ್ಷ್ಮವಾದ ಫಂಗಸ್ ನಮ್ಮ ಗಮನ ಸೆಳೆಯುತ್ತದೆಯೇ; ಖಂಡಿತ ಇಲ್ಲ. ಅದೊಂದು ಪ್ರಕೃತಿಯ ವಿಸ್ಮಯ ಎನ್ನುವುದನ್ನು ನಾವೆಂದೂ ಕಾಣುವುದೇ ಇಲ್ಲ. ಆದರೆ ಕ್ಯಾಮೆರಾ ಕಣ್ಣಿನಲ್ಲಿ ಅದೇ ಫಂಗಸ್ ಅನ್ನು ಡಿ.ಗರುಡ ಅವರು ಪ್ರಕೃತಿ ಸೃಷ್ಟಿಸಿದ "ನ್ಯಾನೊ ಕಾಡು" ಎನ್ನುವ ರೀತಿಯಲ್ಲಿ ಸೆರೆಹಿಡಿದು ಸುಂದರ ಕಲಾಕೃತಿಯಾಗಿಸಿದ್ದಾರೆ.

ನಲ್ಲಿಯ ನೀರು ನಿಂತು, ಕೊನೆಯಲ್ಲಿ ಹನಿಹನಿಯಾಗಿ ತೊಟ್ಟಿಕ್ಕಿ ಬೀಳುವಾಗ ಅದೊಂದು ಅದ್ಭುತ ದೃಶ್ಯವೇ ಆಗಿರುತ್ತದೆ ಎನ್ನುವುದು ಡಿ.ಗರುಡ ಅವರು ಸೆರೆಹಿಡಿದ ಚಿತ್ರದಿಂದ ಅರಿವಾಗುತ್ತದೆ. ಒಂದು ಹನಿ ತೊಟ್ಟಿಕ್ಕುವ ಕ್ಷಣವನ್ನು ಅತಿ ಸೂಕ್ಷ್ಮವಾಗಿ ಲೆನ್ಸ್ ಮೂಲಕ ನೋಡಿದಾಗ ಅದೊಂದು "ಡೀಪ್ ಇಂಪ್ಯಾಕ್ಟ್"ನಂತೆ ಕಾಣಿಸುತ್ತದೆ ಎನ್ನುವುದು ಖಂಡಿತ ಅಚ್ಚರಿಗೊಳಿಸುತ್ತದೆ.

ಕಾಡಿನಲ್ಲಿ ಬೆಳೆದೊಂದು ಮರವು ಸುಂದರಿಯು ಬಳುಕುತ್ತಾ ನಿಂತಂತೆ ಕಾಣುವ ಕಣ್ಣು ಬೇಕು! ಆ ರೀತಿಯ "ವನ ಸುಂದಿರಿ"ಯು ಖಂಡಿತ ಮನಕ್ಕೆ ಮುದ ನೀಡುತ್ತಾಳೆ. ಅದೇ ರೀತಿಯಲ್ಲಿ ಸೂಯರ್ಾಸ್ತ-ಸೂಯರ್ೋದಯದ ಹಲವಾರು ದೃಶ್ಯಗಳು ಕಣ್ಮನ ತಣಿಸುತ್ತವೆ. ನಮ್ಮ ಸುತ್ತಲಿರುವುದೆಲ್ಲವೂ ಸುಂದರ ಎನ್ನುವುದು ಡಿ.ಗರುಡ ಅವರ "ನನ್ನ ಸುತ್ತ" ಛಾಯಾಚಿತ್ರ ಪ್ರದರ್ಶನದಲ್ಲಿ ಅಡಗಿರುವ ತತ್ವ.

ಐಡಿಯಾ-ಜಿ ಹಾಗೂ ಗರುಡ ನಾಟ್ಯ ಸಂಘದ ಸಹಯೋಗದಲ್ಲಿ ನಡೆಯಲಿರುವ "ನನ್ನ ಸುತ್ತ" ಪ್ರದರ್ಶನದಲ್ಲಿ ಸುಮಾರು ನೂರೈವತ್ತು ಛಾಯಾಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ವನ್ಯ ಜೀವಿಗಳ ಚಿತ್ರಗಳೂ ಸೇರಿವೆ. ಅಷ್ಟೇ ಅಲ್ಲ ಮಾಡೆಲಿಂಗ್, ಪೋರ್ಟರೇಟ್, ಪ್ರಕೃತಿ, ಮಾನವೀಯ ಸಂವೇದನೆ...ಹೀಗೆ ಹತ್ತು ಹಲವು ವಿಷಯಗಳನ್ನು ಸುತ್ತಿ ಬರುವ ಛಾಯಾಚಿತ್ರ ಕಲಾಕೃತಿಗಳಿವೆ.

ವೃತ್ತಿಯಿಂದ ಪತ್ರಕರ್ತರಾಗಿರುವ ಡಿ.ಗರುಡ ಅವರು ಪ್ರವೃತ್ತಿಯಿಂದ ಛಾಯಾಗ್ರಾಹಕರು. ದುಬಾರಿ ಎನ್ನಿಸುವ ಛಾಯಾಚಿತ್ರ ಹವ್ಯಾಸವನ್ನು ಕೇವಲ ತಮ್ಮ ಮನೆಯಲ್ಲಿನ ಅಲ್ಬಂಗೆ ಸೀಮಿತವಾಗಿ ಇಟ್ಟುಕೊಳ್ಳಲು ಬಯಸದ ಅವರು "ನನ್ನ ಸುತ್ತ" ಎನ್ನುವ ಪ್ರದರ್ಶನದ ಮೂಲಕ ಸೃಜನಾತ್ಮಕತೆಗೆ ಸ್ಪಂದಿಸುವಂತಹ ಕಲಾಪ್ರಿಯರ ಮುಂದಿಡುತ್ತಿದ್ದಾರೆ.

"ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಅಂತರರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ದೊಡ್ಡ ಗಣೇಶ ಅವರು ಶನಿವಾರ ಬೆಳಿಗ್ಗೆ 11.00ಕ್ಕೆ ಉದ್ಘಾಟಿಸುವರು. ಸಾಮಾಜಿಕ ಕಾರ್ಯಕರ್ತರಾದ ರತ್ನಾ ಎಂ.ಶ್ರೀನಿವಾಸ್ ಹಾಗೂ ಖ್ಯಾತ ಟೆಲಿವಿಷನ್ ನಟರಾದ ಅಂಬರೀಷ್ ಸಾರಂಗಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.